'ಮಫ್ತಿ' ಚಿತ್ರದಲ್ಲಿ ರೋಣಾಪುರಕ್ಕೆ ರಾಕ್ಷಸನೂ, ರಕ್ಷಕನೂ ಆಗಿ ರಣಗಲ್ ರಾಜ್ಯಭಾರ ಮಾಡಿದ್ದು ಗೊತ್ತೇಯಿದೆ. ಆದರೆ ಈ ಭೈರತಿ ರಣಗಲ್ ಯಾರು? ಆತನ ಹಿನ್ನೆಲೆ ಏನು? ಎನ್ನುವುದಕ್ಕೆ ಉತ್ತರ ಎನ್ನುವಂತೆ 'ಭೈರತಿ ರಣಗಲ್' ಸಿನಿಮಾ ಮೂಡಿ ಬಂದಿದೆ. ಕನ್ನಡ ಚಿತ್ರರಂಗದಮಟ್ಟಿಗೆ ಇದು ಮೊದಲ ಪ್ರೀಕ್ವೆಲ್ ಸಿನಿಮಾ.
ತನ್ನ ಜನರಿಗೆ ಒಳ್ಳೆಯದು ಮಾಡಬೇಕು, ಅವರ ರಕ್ಷಣೆಗೆ ನಿಲ್ಲಬೇಕು, ಅದಕ್ಕಾಗಿ ಪ್ರಾಣ ತೆಗೆಯೋಕು ಸಿದ್ಧ, ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ರಣಗಲ್ ಶಪಥ ಮಾಡಿದ್ಯಾಕೆ? ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಂಗಿ ಯಾಕೆ ಅಣ್ಣನ ಜೊತೆ ಮಾತನಾಡಲ್ಲ? ರಣಗಲ್ ಮಾಫಿಯಾ ಡಾನ್ ಆಗಿ ಬದಲಾಗಿದ್ಯಾಕೆ? ಅಂತಹ ಬಲವಾದ ಕಾರಣ ಏನು? ಎನ್ನುವ ಪ್ರಶ್ನೆಗಳನ್ನು 'ಮಫ್ತಿ' ಸಿನಿಮಾ ಉಳಿಸಿತ್ತು.