Current Date 09 May, 2026

Amruthadhaare ; ಜೈದೇವ್ ಕೈಯಿಂದ ಜಸ್ಟ್ ಮಿಸ್ ಆದ ಭಾಗ್ಯ,ಅಮ್ಮನ ಸುಳಿವು ಪಡೆದ ಗೌತಮ್..!

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಗೆ ತನ್ನ ತಾಯಿ ಹಾಗೂ ಸಹೋದರಿ ಬದುಕಿದ್ದಾರೆ ಎಂಬ ಸತ್ಯ ತಿಳಿದಾಗಿನಿಂದಲೂ ಮನಸ್ಸಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ತಾನು ಇಷ್ಟು ದೊಡ್ಡ ಶ್ರೀಮಂತನಾದರೂ ಕೂಡ ತನ್ನ ತಾಯಿ ಹಾಗೂ ಸಹೋದರಿ ಇಬ್ಬರೂ ಕೂಡ ಕಷ್ಟಪಟ್ಟು ಜೀವನ ಮಾಡುತ್ತಿದ್ದಾರೆ ಎಂದು ಚಿಂತಿಸುತ್ತಿದ್ದಾರೆ.ನಿತ್ಯ ಗೌತಮ್ ಗೆ ಭೂಮಿಕಾ ಸಮಾಧಾನ ಮಾಡುತ್ತಿರುತ್ತಾಳೆ. ಅಲ್ಲದೇ, ಈಗಾಗಲೇ ಶಕುಂತಲಾಳಿಗೂ ಈ ಸತ್ಯ ಗೊತ್ತಾಗಿರುವುದು ಗೌತಮ್ ಗೆ ಕೊಂಚ ಸಮಾಧಾನವನ್ನು ತಂದಿದೆ.

ಭಾಗ್ಯಳನ್ನು ಕೊಲ್ಲಲು ಮುಂದಾದ ಜೈದೇವ್

 

ತನ್ನ ತಾಯಿ ಶಕುಂತಲಾಳಿಗೋಸ್ಕರ ಈಗ ಜೈದೇವ್ ಭಾಗ್ಯಳನ್ನು ಹುಡುಕಿಸುತ್ತಿದ್ದಾನೆ. ಗೌತಮ್ ಗೆ ಸಿಕ್ಕಿರುವ ಮಾಹಿತಿಯನ್ನು ಇಟ್ಟುಕೊಂಡು ಅವರು ಎಲ್ಲಿರಬಹುದು ಎಂದು ಗೆಸ್ ಮಾಡಿದ್ದಾನೆ. ಹುಡುಗರನ್ನು ಬಿಟ್ಟು ಹುಡುಕಿಸಿದ್ದಾನೆ. ದುರಾದೃಷ್ಟವಶಾತ್ ಭಾಗ್ಯ ಜೈದೇವ್ ಕಣ್ಣಿಗೆ ಬಿದ್ದಿದ್ದಾಗಿದೆ. ಶಕುಂತಲಾ ಭಾಗ್ಯಳ ಜೊತೆಗೆ ಮಾತನಾಡಲು ಬಯಸಿದ್ದಳು. ಆದರೆ, ಜೈದೇವ್ ಹಾಸಿಗೆ ಮೇಲೆ ಮಲಗಿರುವ ಭಾಗ್ಯ ಮತ್ತೆ ಏಲೂವುದೇ ಬೇಡ ಎಂದು ಪ್ಲಾನ್ ಮಾಡಿದ್ದಾನೆ. ಮಾವ ಲಕ್ಷ್ಮೀಕಾಂತನ ಜೊತೆ ಸೇರಿಕೊಂಡು ಭಾಗ್ಯ ಮತ್ತು ಆಕೆಯ ಸಹೋದರಿ ಇಬ್ಬರನ್ನು ಕೊಲ್ಲಲು ಮುಂದಾಗಿದ್ದಾನೆ.