Current Date 15 May, 2026

"ಕೇವಲ 3 ಗಂಟೆಯಲ್ಲಿ ಯಶ್ ನನ್ನ ಯೋಚನೆಯನ್ನೇ ಬದಲಿಸಿದ್ದರು"; ಹೀಗಂದ ತಮಿಳು ನಿರ್ದೇಶಕನ್ಯಾರು?

ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. 'ಕೆಜಿಎಫ್' ಸೀರಿಸ್ ಮೂಲಕ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದ ಹೆಗ್ಗಳಿಕೆ ಇವರಿಗೇ ಸಲ್ಲುತ್ತೆ. ಅದೇ ರೀತಿ ಕೆಲವರು ಪ್ಯಾನ್ ಇಂಡಿಯಾ ಸಿನಿಮಾಗಳಿಂದಲೇ ಕನ್ನಡ ಚಿತ್ರರಂಗ ಈ ಹಂತಕ್ಕೆ ಬಂದಿದೆ ಎಂದು ಟೀಕೆ ಕೂಡ ಮಾಡುತ್ತಿದ್ದಾರೆ. ಪರೋಕ್ಷವಾಗಿ ಯಶ್ ವಿರುದ್ಧ ಸಿಡಿದೆದ್ದ ಉದಾಹರಣೆಗಳು ಇವೆ.

ಆದರೆ, ಇಲ್ಲೊಬ್ಬ ತಮಿಳಿನ ನಿರ್ಮಾಪಕ ಯಶ್‌ ಪ್ಯೂಚರ್ ಪ್ಲ್ಯಾನ್‌ಗಳನ್ನು ಕೇಳಿ ದಂಗಾಗಿ ಹೋಗಿದ್ದರು. ಯಶ್ ಮುಂದಿನ ಯೋಜನೆಗಳನ್ನು ಕೇಳಿ ಅವರಲ್ಲೂ ಹೊಸ ಹುಮ್ಮಸ್ಸು ಬಂದಿತ್ತು. ಅದಕ್ಕೆ 300 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆ ತಮಿಳಿನ ನಿರ್ಮಾಪಕ ಮತ್ಯಾರೂ ಅಲ್ಲ ಜ್ಞಾನವೇಲ್ ರಾಜ.