ತಪ್ಪು ಮಾಡಿದವರು ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇಬೇಕು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಪರಾಧಿಗಳು ತಪ್ಪಿಸಿಕೊಂಡು ತಲೆ ಮರೆಸಿಕೊಳ್ಳುವ ದೃಶ್ಯಗಳನ್ನು ನೋಡಿರುತ್ತೇವೆ. ನಿಜ ಜೀವನದಲ್ಲೂ ಸಾಕಷ್ಟು ಪ್ರಕರಣಗಳ ಆರೋಪಿಗಳು ತಪ್ಪಿಸಿಕೊಂಡಿರುವ ಉದಾಹರಣಗಳಿವೆ.
ಬರೋಬ್ಬರಿ 20 ವರ್ಷಗಳ ಬಳಿಕ ಕೊಲೆ ಆರೋಪಿಯನ್ನು ಬೆಂಗಳೂರು ಪೊಲೀಸರು ಇದೀಗ ಬಂಧಿಸಿದ್ದಾರೆ. ಆರೋಪಿ ಗಜೇಂದ್ರ ಕೆಲ ವರ್ಷಗಳ ಹಿಂದೆ ಒಂದೆರಡು ಸಿನಿಮಾ ನಿರ್ದೇಶ ಮಾಡಿದ್ದ. ಆದರೆ 2004ರಲ್ಲಿ ವಿಲ್ಸನ್ ಗಾರ್ಡನ್ ರೌಡಿ ಶೀಟರ್ ಕೊತ್ತರವಿ ಎಂಬಾತನ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಚಂದ್ರ್ಪ, ಅಲ್ಯೂಮಿನಿಯಂ ಬಾಬು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ 8ನೇ ಆರೋಪಿಯಾಗಿದ್ದ ಗಜೇಂದ್ರ ಶಿಕ್ಷೆ ಅನುಭವಿಸಿದ್ದ