ಚಿತ್ರರಂಗದಲ್ಲಿ ಮೊದಲಿಂದ ಗುರುತಿಸಿಕೊಂಡವರು, ಸಿನಿಮಾದಲ್ಲಿದವರ ಮಕ್ಕಳು ಮಾತ್ರ ಸಿನಿಮಾರಂಗಕ್ಕೆ ಬರಬೇಕೆಂಬ ಅಲಿಖಿತ ನಿಯಮ ಹಿಂದೊಮ್ಮೆ ಇತ್ತು. ಆದರೆ ಬದಲಾದ ಕಾಲದಲ್ಲಿ ಈ ಓಬಿರಾಯನ ಕಾಲದ ಡೈಲಾಗುಗಳು ಈಗೀಗ ಮೂಲೆಗೆ ಸೇರಿವೆ. ಯಾಕಂದ್ರೆ ಈಗ ಟ್ಯಾಲೆಂಟ್ ಒಂದೇ ಮಾನದಂಡ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗಕ್ಕೆ ಅನೇಕರು ಕನಸನ್ನೊತ್ತು ಬರುತ್ತಿದ್ಧಾರೆ. ಈ ಸಾಲಿಗೆ ಈಗ ಕಿರಣ್ ಸುಬ್ರಮಣಿ ಕೂಡ ಸೇರಿಕೊಂಡಿದ್ದಾರೆ.
ಹೌದು, ಕಿರಣ್ ಸುಬ್ರಮಣಿ.. ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬಂದಿರುವ ಪ್ರತಿಭಾವಂತ. ತಮ್ಮ ಮೊದಲ ಪ್ರಯತ್ನ 'ಸಿ' ಚಿತ್ರವನ್ನು ನಿರ್ದೇಶಿಸುವುದಲ್ಲದೇ ಚಿತ್ರದ ಮುಖ್ಯ ಪಾತ್ರವನ್ನೂ ನಿರ್ವಹಿಸಿರುವ ಕಿರಣ್ ಸದ್ಯಕ್ಕೆ ತಮ್ಮ ಕನಸಿನ ಕೂಸು ' ಸಿ' ಪರಿಚಯವನ್ನು ಕನ್ನಡಿಗರಿಗೆ ಮಾಡಿಸಿದ್ದಾರೆ. ಟೀಸರ್ ಅನಾವರಣಗೊಳಿಸಿದ್ದಾರೆ.