Current Date 15 May, 2026

ದರ್ಶನ್‌ಗೆ ಬೇಲ್ ಸಿಗಲು ಕಾನೂನಾತ್ಮಕವಾಗಿ ಈ ಅಂಶಗಳನ್ನು ರುಜುವಾತು ಮಾಡಬೇಕು!

ದರ್ಶನ್‌ಗೆ ಬೇಲ್ ಸಿಗಲು ಕಾನೂನಾತ್ಮಕವಾಗಿ ಈ ಅಂಶಗಳನ್ನು ರುಜುವಾತು ಮಾಡಬೇಕು!

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. 19 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು ಎ2 ಆಗಿ ವಿಚಾರಣಾಧೀನ ಖೈದಿಯಾಗಿ ನಟ ದರ್ಶನ್ ಸಹ ಸೆರೆವಾಸ ಅನುಭವಿಸುತ್ತಿದ್ದಾರೆ. ಕೊಲೆ ಪ್ರಕರಣವಾಗಿರುವುದರಿಂದ ಅಷ್ಟು ಸುಲಭವಾಗಿ ಜಾಮೀನು ಸಿಗಲ್ಲ ಎನ್ನಲಾಗ್ತಿದೆ.

ಪೊಲೀಸರು ಶಾರ್ಜ್‌ಶೀಟ್ ಸಲ್ಲಿಸುವವರಿಗೂ ಬೇಲ್ ಸಿಗಲ್ಲ ಎಂದು ಚರ್ಚೆ ನಡೆಯುತ್ತಿದೆ. ಅಂದಹಾಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಸಿಗಬೇಕು, ಅವರು ಹೊರ ಬರಬೇಕು ಅಂದ್ರೆ ಒಂದಷ್ಟು ಅಂಶಗಳನ್ನು ರುಜುವಾತು ಮಾಡಬೇಕಿದೆ. ಸಾಕಷ್ಟು ಜನ ವಕೀಲರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.