Current Date 25 Aug, 2026

"ಯಾರದ್ದೋ ಒಬ್ಬರ ಮಿಸ್ಟೇಕ್‌ನಿಂದ ಸಿನಿಮಾಗಳು ಜನರಿಗೆ ತಲುಪೋದ್ರಲ್ಲಿ ಹಿನ್ನಡೆಯಾಗ್ತಿದೆ"; ನಿರ್ಮಾಪಕ ಉಮಾಪತಿ


ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಯಾರೋ ಕೆಲವರು ಬೇರೆ ಹೀರೊಗಳ ಸಿನಿಮಾಗಳನ್ನು ನೋಡಬೇಡಿ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ವೇದಿಕೆ ಮೇಲೆ ಪ್ರತಿಕ್ರಿಯೆ ನೀಡಿದ್ದರು. ಆ ಸಂಬಂಧ ಮಾಧ್ಯಮದವರು ಹೇಳಿದ ಪ್ರಶ್ನೆಗೆ ಉಮಾಪತಿ ಮತ್ತೆ ರಿಯಾಕ್ಟ್ ಮಾಡಿದ್ದಾರೆ.

ಸಿನಿಮಾರಂಗ ಯಾರೊಬ್ಬರ ಸ್ವತ್ತೂ ಅಲ್ಲ. ಇಲ್ಲಿ ಯಜಮಾನಿಕೆ ವಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸದ್ಯ ಕನ್ನಡ ಚಿತ್ರರಂಗದಲ್ಲಿ ಕೆಟ್ಟ ಘಳಿಗೆ ನಡೆಯುತ್ತಿದೆ. ಆದರೆ, ಮುಂದಿನ ದಿನ ಒಳ್ಳೆಯ ಘಳಿಗೆ ಬರುತ್ತೆ ಎಂದು ಹೇಳಿದ್ದಾರೆ. ಐಪಿಎಲ್, ಚುನಾವಣೆ ಇದ್ದಿದ್ದರಿಂದ ಸಿನಿಮಾರಂಗದಲ್ಲಿ ಏಳು-ಬೀಳುಗಳು ಆಗಿವೆ. ಮುಂದಕ್ಕೆ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಹೀಗಿದೆ.