Current Date 09 May, 2026

ನನ್ನದೇನಾದರೂ ಇದ್ದರೆ ಕೇಳಿ, ದರ್ಶನ್ ಬಗ್ಗೆ ಕೇಳಿದ್ದಕ್ಕೆ ಜಗ್ಗೇಶ್ ಹೀಗೆ ಹೇಳೋದಾ...?

ಜಗ್ಗೇಶ್ ಅದ್ಭುತ ನಾಯಕ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅವರ ಡೈಲಾಗ್ ಡೆಲಿವರಿ ಮತ್ತು ಕಾಮಿಡಿ ಟೈಮಿಂಗ್ ನ ಯಾರಿಂದಲೂ ಅಷ್ಟು ಸುಲಭಕ್ಕೆ ಅನುಕರಿಸಲು ಸಾಧ್ಯವಿಲ್ಲ.ಇಂಥ ಜಗ್ಗೇಶ್ ಕಾಲ ..ಕಾಲಕ್ಕೆ .. ಕನ್ನಡ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಕಿಡಿ ಕಾರ್ತಾನೆ ಬಂದಿದ್ದಾರೆ. ಅದು, ಪ್ಯಾನ್ ಇಂಡಿಯಾ ವಿಚಾರದಲ್ಲಿರಲಿ .. ಕಿರಿಯರಿಗೆ ಹಿರಿಯರ ಮೇಲಿರುವ ಗೌರವದ ವಿಚಾರದಲ್ಲಿರಲಿ.. ಜಗ್ಗೇಶ್ ತಮ್ಮ ಅಸಮಾಧಾನ ಹೊರ ಹಾಕ್ತಾನೇ ಬಂದಿದ್ದಾರೆ.

ಇನ್ನೂ..ನಿಮಗೆ ಗೊತ್ತು.. ಜಗ್ಗೇಶ್ ಮತ್ತು ಸದ್ಯಕ್ಕೆ ಜೈಲು ಪಾಲಾದ ದರ್ಶನ್ ನಡುವೆ ಒಂದಾನೊಂದು ಕಾಲದಲ್ಲಿ ಸ್ನೇಹ ಮತ್ತು ಅನುಬಂಧ ಇತ್ತು. ಆದರೆ, ಅದ್ಯಾವಾಗ .. ದರ್ಶನ್ ಥರ ಅವುರ್ ಥರಾ ಇದಾರಲ್ಲಾ? ಅವನ..ನ್ ತಲೆ ಮಾಂಸ ಕಳಿಸಿ ಅಣ್ಣಾ.... ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರೆಲ್ಲಾ ಇಲ್ಲ....ಅಂತಾ ಯದ್ವಾ ತದ್ವಾ ಜಗ್ಗೇಶ್ ಮಾತನಾಡಿದ್ರೋ ಆ ದಿನದಿಂದನೇ ಈ ಸಂಬಂಧ ಮುರಿದು ಬಿತ್ತು. ಅಲ್ಲಿಂದಾಚೆ .. ದರ್ಶನ್ ಮತ್ತು ಜಗ್ಗೇಶ್ ವಿರುದ್ಧ ದಿಕ್ಕಿನ ಕಡೆ ಮುಖ ಮಾಡಿದರು.