Current Date 15 May, 2026

''ದುಡಿಮೆಗೆ ಹತ್ತುವ ಮಂದಿ,ತಲೆ ಎತ್ತಿ ಬದುಕುತ್ತಾರೆ'' - ಧರ್ಮಣ್ಣ ಹೀಗೆ ಹೇಳಿದ್ದೇಕೆ..?

ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ ಧರ್ಮಣ್ಣ ಕಡೂರು. ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ ಅನ್ನುವುದನ್ನೂ ಸಾಬೀತು ಮಾಡಿ ಕಾಮಿಡಿ ಆಕ್ಟರ್‌ನಿಂದ ಆಕ್ಟರ್‌ ಆಗಿ ಬಡ್ತಿ ಪಡೆದ ಧರ್ಮಣ್ಣ ಮುಳ್ಳಿನ ಹಾದಿಯಲ್ಲಿ ನಡೆದು ಬಂದವರು. ಕಷ್ಟ-ನಷ್ಟದ ಬೆಂಕಿಯಲ್ಲಿ ಬೆಂದವರು.

ಇಂಥಾ ಧರ್ಮಣ್ಣ ಇವತ್ತು ಸಿನಿಮಾದಲ್ಲಿ ದುಡಿದ ದುಡ್ಡಿಂದ ಸ್ವಂತ ಮನೆಯನ್ನೂ ಕಟ್ಟಿಸಿದ್ದಾರೆ. ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ. ಇವತ್ತು ಧರ್ಮಣ್ಣ ಕೈ ತುಂಬಾ ದುಡ್ಡು ಇದೆ. ಇವರ ಅಭಿನಯವನ್ನೂ ಕೊಂಡಾಡುವ ವರ್ಗವೂ ಇದೆ. ಹಾಗಂಥ ಧರ್ಮಣ್ಣ ಮೈ ಮರೆತಿಲ್ಲ. ಹಳೆಯದೆಲ್ಲವನ್ನೂ ಮರೆತಿಲ್ಲ. ಇವತ್ತು ಕೂಡ ಧರ್ಮಣ್ಣಗೆ ತಾವು ನಡೆದು ಬಂದ ದಾರಿ ನೆನಪಿದೆ. ಇದಕ್ಕೆ ಪುರಾವೆ ಎನ್ನುವಂತೆ ಬಡ ಹುಡುಗನ ಕಷ್ಟವನ್ನೂ ಕಂಡು ಧರ್ಮಣ್ಣ ಮರುಗಿದ್ದಾರೆ. ತಮ್ಮೆದುರು ಆ ಹುಡುಗ ಹಂಚಿಕೊಂಡ ಕಥೆಯನ್ನೂ ಹಂಚಿಕೊಂಡಿದ್ದಾರೆ.