ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ದರ್ಶನ್ ಸದ್ಯಕ್ಕೆ ಅತ್ಯುತ್ತಮ ಉದಾಹರಣೆ.
ಸ್ಯಾಂಡಲ್ ವುಡ್ ಏಕ ಚಕ್ರಾಧಿಪತಿ.. ಬಾಕ್ಸ್ ಆಫೀಸ್ ಸುಲ್ತಾನ್.. ಚಾಲೆಂಜಿಂಗ್ ಸ್ಟಾರ್.. ಹೀಗೆ ಹತ್ತಾರು ಬಿರುದು ಬಾವಲಿಗಳನ್ನು ಹೊಂದಿರುವ ದರ್ಶನ್, ಜೈಲು ಹಕ್ಕಿಯಾಗುವ ಮುನ್ನ ಸುಖದ ಸುಪ್ಪತ್ತಿಗೆ ಅಲ್ಲಿದ್ದರು. ಹಿಂದೆ-ಮುಂದೆ ಇವರನ್ನು ಕಾಯಲೆಂದೇ ಒಂದು ಡಜನ್ ಜನರಿರುತ್ತಿದ್ದರು. ಇನ್ನೂ.. ಸಿಹಿ..ಹುಳಿ..ಕಹಿ..ಉಪ್ಪು.. ಬಾಯಿ ರುಚಿಯನ್ನೂ ಹೆಚ್ಚಿಸುತ್ತಿದ್ದವು. ಆದರೆ ಮಾಡಿಕೊಂಡ ಸಹವಾಸ ಈಗ ತಿನ್ನೋ ಅನ್ನಕ್ಕೂ ಕಲ್ಲು ಹಾಕಿದೆ. ಜೈಲೂಟ ರುಚಿಸುತ್ತಿಲ್ಲ. ಜೈಲಿನ ಆಹಾರದಿಂದ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗುತ್ತಿದೆ. ದೇಹದ ತೂಕ ಕೂಡ ಇಳಿಕೆಯಾಗಿದೆ. ಹೀಗಾಗಿಯೇ.. ಮನೆ ಊಟಕ್ಕಾದರೂ ಅವಕಾಶ ಮಾಡಿಕೊಡಿ ಎಂಬ ಮನವಿಯನ್ನೂ ದರ್ಶನ್ ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ದರ್ಶನ್ಗೆ ಮನೆಯಲ್ಲಿ ಪ್ರೀತಿಯಿಂದ ಮಾಡುವ ಅಡುಗೆಯನ್ನು ತಿನ್ನುವ ಯೋಗ ಮಾತ್ರ ಕೂಡಿ ಬರುತ್ತಿಲ್ಲ.