Current Date 15 May, 2026

'ಸಂಭವಾಮಿ ಯುಗೇ ಯುಗೇ' ಟ್ರೈಲರ್ ನೋಡಿದ್ರಾ? ರೇಣುಕಾಸ್ವಾಮಿ ಕೊಲೆ ಹೋಲುವ ದೃಶ್ಯ ಕಾಕತಾಳಿಯವೇ?


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ದೇಶಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಎಲ್ಲಿ ನೋಡಿದರೂ, ದರ್ಶನ್ ವಿರುದ್ಧ ಆಕ್ರೋಶದ ಮಾತುಗಳೇ ಕೇಳಿ ಬರುತ್ತಿವೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಮತ್ತು ಅವರ ಗ್ಯಾಂಗ್ ವಿಚಾರಣೆಯನ್ನು ಎದುರಿಸುತ್ತಿದೆ.
ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯ ಅಷ್ಟೇ ಅಲ್ಲ, ದೇಶಾದ್ಯಂತ ದೊಡ್ಡ ಮಟ್ಟಕ್ಕೆ ಹಲ್‌ಚಲ್ ಮೂಡಿಸಿದೆ. ಆದರೆ, ಕಾಕತಾಳೀಯವೋ ಏನೋ? ಇಲ್ಲೊಂದು ಸಿನಿಮಾದ ಟ್ರೈಲರ್‌ನಲ್ಲಿ ರೇಣುಕಾಸ್ವಾಮಿ ಮೃತದೇಹ ಸಿಕ್ಕಿದ ರೀತಿಯಂತಹ ದೃಶ್ಯವಿದೆ. ಆ ದೃಶ್ಯ ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.