Current Date 10 Jun, 2026

ಮೈ ಕೈ ಆಡಿಸುವುದು, ತುಟಿ ಕಚ್ಚಿ ಮೈ ಕುಣಿಸುವುದು, ಕನ್ನಡಿಗರನ್ನು ಕೆಣಕಿದವಳಿಗೆ ಮಾಳವಿಕಾ ಅವಿನಾಶ್ ತಪರಾಕಿ..!

ನಾವೂ ಇದ್ದರೆ ನೀವು ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಬಾಯಿಗೆ ಬಂದಂತೆ ಮಾತನಾಡಿ, ಕನ್ನಡಿಗರನ್ನು ಕೆಣಕಿದ್ದವರು ಸುಗಂಧ್ ಶರ್ಮಾ. ಕೋರಮಂಗಲದ ಪಬ್ಬು - ಕ್ಲಬ್ಬುಗಳಲ್ಲಿಯೇ ಎದ್ದು ಬಿದ್ದು ವಾಲಾಡುವಂತೆ ಕಾಣಿಸುವ ಸುಗಂಧ್ ಶರ್ಮಾ ತಾನು ಮಾಡಿದ ಈ ಪ್ರಮಾದದಿಂದ ಸದ್ಯ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ತಿಪ್ಪೆ ಸಾರಿಸಲು ನನಗೆ ಬೆಂಗಳೂರು ಅಂದರೆ ಇಷ್ಟ, ಕನ್ನಡ ಅಂದರೆ ಇಷ್ಟ ಎಂದು ನುಲಿದಿದ್ದಾರೆ.