Current Date 26 Aug, 2026

ದರ್ಶನ್ ಕೊಲೆ ಮಾಡಿದ್ದು ನೀವು ನೋಡಿದ್ರಾ ಎಂದ ಅಪ್ಪು ಅಪ್ಪಿಕೊಂಡಿದ್ದ ನಟ!

ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆ .. ನಾನೇನೂ ಮಾಡಿದರು ಬಚಾವ್ ಆಗ್ಬಿಡ್ತೀನಿ ಎನ್ನುವ ಅಹಂಕಾರ.. ಇವೆಲ್ಲವನ್ನೂ ನೆತ್ತಿಗೇರಿಸಿಕೊಂಡರೆ ಏನಾಗುತ್ತೆ ಅಂತ ಯಾರಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರದಂತೆ ನಿಲ್ಲುವುದು ದರ್ಶನ್ ಎಂಬ ಆರಡಿ ನಾಯಕನ ಬದುಕು.

ಇಂಥ ದರ್ಶನ್ ಈಗ ಜೈಲಿನಲ್ಲಿದ್ದಾರೆ. ನಿಜಾ.. ದರ್ಶನ್ ಕೇವಲ ಆರೋಪಿ ಮಾತ್ರ, ಇನ್ನೂ ಅಪರಾಧಿ ಎಂದು ಸಾಬೀತು ಆಗಿಲ್ಲ. ಹಾಗಂಥ ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿಯೇ ಇಲ್ಲ ಎಂಬ ವಾದ ಮಾಡುವಂತೆ ಇಲ್ಲ. ಯಾಕೆಂದರೆ, ರೇಣುಕಾ ಸ್ವಾಮಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದು ಇದೇ ದರ್ಶನ್ ಫರ್ಮಾನು ಹೊರಡಿಸಿದ ನಂತರವೇ.