Current Date 09 May, 2026

ಅಶ್ವಿನಿ ಮೇಡಂ ವಿರುದ್ಧ ಅವರ ಕಡೆಯವರು ಕೊಳಕು ಮಾತನಾಡಿದಾಗ ದರ್ಶನ್ ಯಾಕೆ ಮಾತಾಡಿಲ್ಲ- ಸುಷ್ಮಾ ವೀರ್..!

ಹೆಚ್ಚೇನು ಇಲ್ಲ.. ಕೆಲ ದಿನದ ಹಿಂದೆ ಅವನ್ಯಾರೋ ಗುರುತು ಪರಿಚಯ ಇರದ ಗಜಪಡೆ ಎಂಬ ವ್ಯಕ್ತಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಕೆಟ್ಟಾ ಕೊಳಕಾಗಿ ನಿಂದಿಸಿದ್ದ. ಮಾತನಾಡಬಾರದ ಮಾತುಗಳನ್ನಾಡಿ ಕನ್ನಡಿಗರನ್ನು ಕೆರಳಿಸಿದ್ದ. ಆ ವ್ಯಕ್ತಿ ಆ ನಂತರ ಏನಾದ ಅನ್ನುವುದು ಬೇರೆ ವಿಚಾರವಾದರೂ, ಇಡೀ ಕರುನಾಡು ಆ ಅನಾಮಧೇಯ ವ್ಯಕ್ತಿಯನ್ನು ಸದ್ಯಕ್ಕೆ ಮಾಡಬಾರದ್ದನ್ನ ಮಾಡಿ ಜೈಲು ಪಾಲಾದ ದರ್ಶನ್ ಅವರ ಅಭಿಮಾನಿಯೇ ಎಂದು ಪರಿಗಣಿಸಿತ್ತು. ನಿಮ್ಮ ಭಕ್ತರಿಗೆ ಕರೆದು ಬುದ್ದಿ ಹೇಳಿ ಎಂಬ ಮಾತನ್ನೂ ಹೇಳಿತ್ತು.

ಆದರೆ, ಕರೆದು ಬುದ್ದಿ ಹೇಳುವುದು ಇರಲಿ, ತಮ್ಮ ಅಭಿಮಾನಿಯ ಈ ಕೀಳು ಮಟ್ಟದ ಅಭಿರುಚಿಯ ಬಗ್ಗೆ ದರ್ಶನ್ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಇಂಥ ದರ್ಶನ್ ಬಗ್ಗೆ ಗುಬ್ಬಿ ವೀರಣ್ಣ ಮರಿ ಮೊಮ್ಮಗಳು, ಗಾಯಕಿ-ನಟಿ ಬಿ. ಜಯಶ್ರೀ ಪುತ್ರಿ ಸುಷ್ಮಾ ವೀರ್ ಬಗ್ಗೆ ಮಾತನಾಡಿದ್ದಾರೆ.